ಮಣ್ಣಿನ ಪೋಷಕಾಂಶಗಳ ಲಭ್ಯತೆಯಲ್ಲಿ ಅಸಮತೋಲನವಿದ್ದಾಗ ಸಸ್ಯಗಳು ಪೋಷಕಾಂಶಗಳ ಕೊರತೆಗೆ ಒಳಗಾಗುತ್ತವೆ. ಇದರ ಫಲವಾಗಿ ಅವುಗಳ ಬೆಳವಣಿಗೆ ಮತ್ತು ಗುಣಮಟ್ಟ ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿರುತ್ತವೆ. ಸಸ್ಯಗಳಿಗೆ ಸ್ಥಿರವಾದ ಹಾಗೂ ಸಮತೋಲನವಾದ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಕೆಲಮೊಮ್ಮೆ ಪೋಷಕಾಂಶಗಳ ಕೊರತೆ ಉಂಟಾಗಬಹುದು ಅಥವಾ ಅವು ನಂಜನ್ನುಂಟುಮಾಡುವಷ್ಟು ಅಧಿಕ ಪ್ರಮಾಣದಲ್ಲಿರಬಹುದು.
ಮಣ್ಣಿನಲ್ಲಿ ಯಾವ ಪೋಷಕಾಂಶಗಳ ಕೊರತೆ ಇದೆ ಮತ್ತು ಅದು ಯಾವ ಪ್ರಮಾಣದಲ್ಲಿ ಇದೆ. ಎಂಬುದನ್ನು ತಿಳಿಯುವುದು ಸಾಧ್ಯವಾದರೆ ರಸಗೊಬ್ಬರಗಳನ್ನು ಬಳಸಿ ಪೋಷಕಾಂಶಗಳ ಲಭ್ಯತೆಯನ್ನು ಸರಿದೂಗಿಸಬಹುದು. ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಮಣ್ಣು ಪರೀಕ್ಷೆಯಿಂದ ತಿಳಿದುಕೊಳ್ಳಬಹುದು. ಈ ಉದ್ದೇಶಕ್ಕಾಗಿಯೇ ಮಣ್ಣು ಪರೀಕ್ಷೆ ಮಾಡಿಸುವುದು ಅತ್ಯವಶ್ಯಕ.
ಮಣ್ಣು ಪರೀಕ್ಷೆಯ ಉದ್ದೇಶಗಳು
1. ಮಣ್ಣುಗಳ ವರ್ಗೀಕರಣ ಮತ್ತು ಮಣ್ಣಿನ ಸಮೀಕ್ಷೆ ಮಾಡಲು.
2. ಯಾವ ಮಣ್ಣಿಗೆ ಯಾವ ಬೆಳೆ ಸೂಕ್ತ ಎಂಬುದನ್ನು ಶಿಫಾರಸು ಮಾಡಲು.
3. ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ತಿಳಿಯಲು ಮತ್ತು ಅದಕ್ಕನುಗುನವಾಗಿ ರಸಗೊಬ್ಬರ ಶಿಫಾರಸು ಮಾಡಲು.
4. ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳನ್ನು ತಿಳಿಯಲು.
5. ಮಣ್ಣಿನ ಆಮ್ಮಿಯತೆ, ಸವಳು, ಕ್ಷಾರತೆ ಇತ್ಯಾದಿ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರ ಸೂಚಿಸಲು.
6. ಮಣ್ಣಿನ ಫಲವತ್ತತೆಯ ನಕ್ಷೆ ತಯಾರಿಸಲು.
7. ಮಣ್ಣಿನ ನಿರ್ವಹಣಾ ಕ್ರಮಗಳ ಬಗ್ಗೆ ಶಿಫಾರಸು ಮಾಡಲು.
ಮಣ್ಣಿನ ವಿಶ್ಲೇಷಣೆಯಲ್ಲಿ ಹಾಗೂ ಶಿಫಾರಸುಗಳಲ್ಲಿ ಉಂಟಾಗುವ ಲೋಪದೋಷಗಳ ಪೈಕಿ. ಮಾದರಿ ಸಂಗ್ರಹಣೆಯಲ್ಲಿ ಉಂಟಾಗುವ ಲೋಪದೋಷಗಳೇ ಬಹುಶಃ ಮುಖ್ಯವಾಗಿರುತ್ತವೆ. ಮಣ್ಣಿನ ವೈವಿಧ್ಯತೆಯೇ ಇದಕ್ಕೆ ಕಾರಣ. ಪ್ರಯೋಗಶಾಲೆಯಲ್ಲಿ ಉಂಟಾಗಬಹುದಾದ ಲೋಪದೋಷಗಳನ್ನು ಬಹುಮಟ್ಟಿಗೆ ಪರಿಮಿತಗೊಳಿಸಬಹುದು. ನಿಜವಾದ ಲೋಪದೋಷಗಳು ಉಂಟಾಗುವುದು ಜಮೀನಿನಲ್ಲಿಯೇ. ಒಂದು ಜಮೀನಿನ ಮಣ್ಣನ್ನು ಪರೀಕ್ಷಿಸಲು ಆ ಜಮೀನಿನಲ್ಲಿರುವ ಎಲ್ಲಾ ಮಣ್ಣನ್ನು ಸಂಗ್ರಹಿಸುವುದು. ಮತ್ತು ಆ ಎಲ್ಲಾ ಮಣ್ಣನ್ನು ವಿಶ್ಲೇಷಣೆಗೊಳಪಡಿಸುವುದು ಅಸಾಧ್ಯವಾದ ಮಾತು. ಆದ್ದರಿಂದ ಆ ಜಮೀನಿನ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುವುದು ಅನಿವಾರ್ಯ. ಆದರೆ, ಹೀಗೆ ಸಂಗ್ರಹಿಸಿದ ಮಣ್ಣಿನ ಮಾದರಿಗಳು ನಿಜವಾಗಿಯೂ ಜಮೀನಿನ ಸ್ಥಿತಿಗತಿಗಳನ್ನು ಪ್ರತಿನಿಧಿಸುವಂತಹುದಾಗಿರಬೇಕು.
ಮಾದರಿಗಳ ಸಂಗ್ರಹಣೆಗೆ ಪೂರ್ವ ತಯಾರಿ:
ಮಾದರಿ ಸಂಗ್ರಹಿಸುವ ಪೂರ್ವದಲ್ಲಿ ಜಮೀನಿನಲ್ಲಿ ತಿರುಗಾಡಿ ಜಮೀನಿನ ಇಳಿಜಾರು, ಬಣ್ಣ, ಕಣವಿನ್ಯಾಸ, ಬೆಳೆಪದ್ಧತಿ. ಹಾಗೂ ನಿರ್ವಹಣೆಯ ಪದ್ಧತಿಗಳು ಇವುಗಳಲ್ಲಿರುವ ವ್ಯತ್ಯಾಸಗಳನ್ನು ಪರಿಶೀಲಿಸಬೇಕು. ಹೀಗೆ ಮಾಡುವುದರಿಂದ ಜಮೀನಿನ ವೈವಿಧ್ಯತೆಯನ್ನು ಅರಿಯಲು ಅನುಕೂಲವಾಗುವುದು. ಈ ವ್ಯತ್ಯಾಸಗಳಿಗನುಗುಣವಾಗಿ ಜಮೀನನ್ನು ಏಕರೀತಿಯ ತುಂಡುಗಳಾಗಿ ವಿಂಗಡಿಸಬೇಕು. ಪ್ರತಿಯೊಂದರಿಂದಲೂ ಪ್ರತ್ಯೇಕವಾಗಿ ಒಂದೊಂದು ಸಂಯುಕ್ತ ಮಾದರಿಯನ್ನು ತೆಗೆಯಬೇಕು.
ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲು ಬೇಕಾಗುವ ಉಪಕರಣಗಳು:
“ಆಗರ್”ಗಳು (ಸ್ಪೂ ಆಗರ್, ಪೋಸ್ಟ್ ಹೋಲ್ ಆಗರ್, ಟ್ಯೂಬ್ ಆಗರ್, ಕೋರ್ ಸ್ಯಾಂಪ್ಲರ್), ಗುದ್ದಲಿ. ಸಲಿಕೆ, ಕುರ್ಪಿ, ಅಳತೆ ಪಟ್ಟಿ, ಪ್ಲಾಸ್ಟಿಕ್/ಬಟ್ಟೆ ಚೀಲಗಳು, ಪ್ಲಾಸ್ಟಿಕ್ ಬುಟ್ಟಿ/ಬಕೇಟ್, ಗುರುತಿನ ಚೀಟಿ. ಸರ್ವೇ ನಂಬರ್ ಮಾಹಿತಿ ಇರುವ ಹಳ್ಳಿಯ ನಕಾಶೆ (ಕ್ಯಾಡೆಸ್ಟಲ್ ನಕಾಶೆ), ಇತ್ಯಾದಿ. ಸ್ಮೃ ಆಗರ್ ಅನ್ನು ಸೂಕ್ಷ್ಮ ಕಣ ಸ್ವರೂಪದ ಮಣ್ಣಿನಲ್ಲಿ (ನಯ ಮಣ್ಣುಗಳಲ್ಲಿ), ಪೋಸ್ಟ್ ಹೋಲ್ ಆಗರ್ ಅನ್ನು ದಪ್ಪ ಕಣ ಸ್ವರೂಪದ ಮಣ್ಣಿನಲ್ಲಿ (ದೊರಗು ಮಣ್ಣುಗಳಲ್ಲಿ). ಮತ್ತು ಟ್ಯೂಬ್ ಆಗರ್ ಒದ್ದೆ ಮಣ್ಣುಗಳಲ್ಲಿ (ಭತ್ತದ ಗದ್ದೆ) ಮಾದರಿಗಳನ್ನು ತೆಗೆಯಲು ಉಪಯೋಗಿಸಬಹುದು. ಕೋರ್ ಸ್ಯಾಂಪ್ಲರ್ನ್ನು ಮಣ್ಣಿನ ಸ್ಕೂಲ ಸಾಂದ್ರತೆಯನ್ನು ಕಂಡು ಹಿಡಿಯಲು ಉಪಯೋಗಿಸುತ್ತಾರೆ.
ಮಣ್ಣಿನ ಮಾದರಿಗಳ ಸಂಗ್ರಹಣಾ ವಿಧಾನ:
ಸಾಮಾನ್ಯವಾಗಿ ಸುಮಾರು 4 ಹೆಕ್ಟೇರ್ ಜಮೀನನ್ನು ಪ್ರತಿನಿಧಿಸುವಂತೆ ಒಂದು ಸಂಯುಕ್ತ ಮಾದರಿಯನ್ನು ತೆಗೆಯಬೇಕಾಗುವುದು. ಆದರೆ ಇದೇ ಕಡ್ಡಾಯವಲ್ಲ. ಜಮೀನಿನ ವೈವಿಧ್ಯತೆಗೆ ಅನುಗುಣವಾಗಿ ಇದರಲ್ಲಿ ಹೆಚ್ಚು ಕಡಿಮೆ ಮಾಡಬಹುದು. ಜಮೀನಿನಲ್ಲಿ ವೈವಿಧ್ಯತೆ ಹೆಚ್ಚು ಹೆಚ್ಚು ಇದ್ದಾಗ, ಎರಡು ಹೆಕ್ಟೇರ್ಗಿಂತ ಕಡಿಮೆ ಜಮೀನನ್ನು ಪ್ರತಿನಿಧಿಸುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳನ್ನು ತೆಗೆಯಬೇಕಾಗುತ್ತದೆ. ಜಮೀನಿನ ವೈವಿಧ್ಯತೆಯನ್ನು ಕಡಿಮೆ ಮಾಡಲು ಜಮೀನನ್ನು ಹೆಚ್ಚು ತುಂಡುಗಳಾಗಿ ಮಾಡುವುದರಿಂದ. ಪ್ರತಿ ಭಾಗದಲ್ಲಿ ಮಣ್ಣಿನ ಲಕ್ಷಣಗಳು ಹೆಚ್ಚು ಕಡಿಮೆ ಒಂದೇ ತೆರನಾಗಿರುತ್ತವೆ.
ಪ್ರತಿ ಸಂಯುಕ್ತ ಮಾದರಿಯನ್ನು ಸುಮಾರು 20 ರಿಂದ 25 ಕಡೆಗಳಲ್ಲಿ ತೆಗೆದ ಉಪಮಾದರಿಗಳಿಂದ ತಯಾರಿಸಲಾಗುತ್ತದೆ. ಪ್ರತಿ ಭಾಗದಲ್ಲಿ ಉಪಮಾದರಿಗಳನ್ನು ತೆಗೆಯುವುದಕ್ಕಿಂತ ಮುಂಚೆ. ನಿರ್ದಿಷ್ಟ ಸಂಖ್ಯೆಯ ಮಾದರಿಗಳನ್ನು ತೆಗೆಯಲು ಜಮೀನಲ್ಲಿ ಸ್ಥಳಗಳನ್ನು ಗುರುತಿಸಬೇಕಾಗುತ್ತದೆ. ಇದಕ್ಕಾಗಿ ಜಮೀನಿನಲ್ಲಿ ಅಡ್ಡಾ-ದಿಡ್ಡಿಯಾಗಿ (ಝಿಗ್-ಝಾಗ್) ಚಲಿಸಬೇಕು. ಮತ್ತು ಪ್ರತಿ 20 ಹೆಜ್ಜೆಗಳಿಗೊಂದರಂತೆ ಮಾದರಿ ತೆಗೆಯುವ ಸ್ಥಳವನ್ನು ಗುರುತಿಸಬೇಕು. ಮಣ್ಣಿನ ಮಾದರಿಯನ್ನು ನಿರ್ದಿಷ್ಟ ಆಳದಿಂದ ತೆಗೆಯಲು ವಿವಿಧ ಸಲಕರಣೆಗಳನ್ನು ಉಪಯೋಗಿಸಬಹುದು.
ಮಾದರಿ ತೆಗೆಯುವ ಆಳವನ್ನು ಮುಂದೆ ಯಾವ ಬೆಳೆ ಬೆಳೆಯಲಾಗುತ್ತದೆ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ. ಹೆಚ್ಚಿನ ವಾರ್ಷಿಕ ಬೆಳೆಗಳ ಬೇರುಗಳು ಮೇಲೈಯಿಂದ ಸುಮಾರು 15 ಸೆಂ.ಮೀ. ಆಳದವರೆಗೆ ಇರುತ್ತವಾದ್ದರಿಂದ. ಇವುಗಳಿಗಾಗಿ ಮೇಲಿನ 15 ಸೆಂ.ಮೀ. ಆಳದ (ನೇಗಿಲ ಆಳ) ಮಣ್ಣನ್ನು ಸಂಗ್ರಹಿಸಬೇಕು. ಇದನ್ನು ಸುಲಭವಾಗಿ ಸಲಕೆಯ ಸಹಾಯದಿಂದ ತೆಗೆಯಬಹುದು. ಸಲಕೆಯಿಂದ ಜಮೀನಿನಲ್ಲಿ 15 ಸೆಂ.ಮೀ. ಆಳದ ಕಣಿವೆ (ಫರೋ) ತೆಗೆದು. ಅದರ ಒಂದು ಮೈಯಲ್ಲಿ ಸುಮಾರು ಎರಡು ಸೆಂಟಿಮೀಟರ್ನಷ್ಟು ಸಮದಪ್ಪದ ಮಣ್ಣನ್ನು ಮೇಲಿನಿಂದ ಕೆಳಗಿನವರೆಗೆ ಕೆತ್ತಿ ತೆಗೆದು ಸಂಗ್ರಹಿಸಬೇಕು. ತೋಟಗಾರಿಕೆ ಬೆಳೆಗಳಲ್ಲಿ ಸುಮಾರು ಒಂದು ಮೀಟರನಷ್ಟು ಆಳದವರೆಗೆ ಪ್ರತಿ 15 ಸೆಂ.ಮೀ. ಪದರದಿಂದಲೂ ಮಾದರಿ ಸಂಗ್ರಹಿಸಬೇಕು. ಇದಕ್ಕಾಗಿ ಒಂದು ಮೀಟರ್ ಉದ್ದ ಮತ್ತು ಅಗಲದ ಹೊಂಡವನ್ನು 1 ರಿಂದ 1.5 ಮೀಟರ್ ಆಳದವರೆಗೆ ತೆಗೆಯಬೇಕು. ಅಥವಾ ಮಣ್ಣು ಮಾದರಿ ತೆಗೆಯುವ “ಆಗರ್” ಸಲಕರಣೆಗಳನ್ನು ಉಪಯೋಗಿಸಿ ನಿರ್ದಿಷ್ಟ ಆಳದ ಮಣ್ಣನ್ನು ಸಂಗ್ರಹಿಸಬಹುದು.
ಪ್ರತಿಯೊಂದು ಸಂಯುಕ್ತ ಮಾದರಿಯನ್ನು ತೆಗೆದಾಗ ಒಟ್ಟಾರೆ ಮಣ್ಣು ಸುಮಾರು 8 ರಿಂದ 10 ಕಿಲೋಗ್ರಾಂಗಳಷ್ಟಿರಬಹುದು. ವಿಶ್ಲೇಷಣೆಗೆ ಇಷ್ಟೊಂದು ಗಾತ್ರದ ಮಣ್ಣಿನ ಮಾದರಿಯ ಅವಶ್ಯಕತೆ ಇರುವುದಿಲ್ಲ. ಇದರ ಗಾತ್ರವನ್ನು ಬೇಕಾದ ಪ್ರಮಾಣಕ್ಕೆ ಇಳಿಸಬೇಕಾಗುತ್ತದೆ. ಈ ರೀತಿ ಮಾಡುವುದಕ್ಕೆ “ಕ್ವಾರ್ಟರಿಂಗ್” ವಿಧಾನ ಎನ್ನುತ್ತಾರೆ. ಈ ವಿಧಾನದಲ್ಲಿ ಮಣ್ಣನ್ನು ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಸಮವಾಗಿ ಹರಡಿ ನಾಲ್ಕು ಭಾಗಗಳಾಗುವಂತೆ ಗುರುತು ಹಾಕಬೇಕು. ಅನಂತರ ವಿರುದ್ಧ ಮೂಲೆಗಳಲ್ಲಿರುವ ಎರಡು ಭಾಗಗಳ ಮಣ್ಣನ್ನು. ಚೆಲ್ಲಿ ಉಳಿದೆರಡು ಭಾಗಗಳ ಮಣ್ಣನ್ನು ಕೂಡಿಸಿ ಪುನಃ ಬೆರೆಸಬೇಕು. ಈ ಮಣ್ಣನ್ನು ಪುನಃ ಹರಡಿ ನಾಲ್ಕು ಭಾಗಗಳನ್ನಾಗಿ ಮಾಡಿ ಮುಂಚಿನಂತೆಯೇ ಪುನರಾವರ್ತಿಸಬೇಕು. ಹೀಗೆ ಮಾಡುವುದರಿಂದ ಮಣ್ಣಿನ ಗಾತ್ರವನ್ನು ಬೇಕಾದ ಗಾತ್ರಕ್ಕೆ (ಸುಮಾರು 0.5 ಕೆ.ಜಿ.ಯಷ್ಟು) ಇಳಿಸಬಹುದು. ಮಣ್ಣಿನ ಮಾದರಿಗಳನ್ನು ಸ್ವಚ್ಚವಾದ ಬಟ್ಟೆ ಅಥವಾ ಪ್ಲಾಸ್ಟಿಕ ಚೀಲದಲ್ಲಿ ಹಾಕಿ ಗುರುತಿನ ಚೀಟಿಯನ್ನು ಮೇಲೆ ಕಟ್ಟಬೇಕು. ಗುರುತಿನ ಚೀಟಿಯಲ್ಲಿ ರೈತನ ಹೆಸರು, ವಿಳಾಸ, ಸರ್ವೆ ಸಂಖ್ಯೆ, ದಿನಾಂಕ ಮುಂತಾದವುಗಳನ್ನು ನಮೂದಿಸಬೇಕು.
ಮಣ್ಣು ಮಾದರಿಯನ್ನು ಸಂಗ್ರಹಿಸುವಾಗ ಗಮನಿಸಬೇಕಾದ ಅಂಶಗಳು:
ಸಂಗ್ರಹಿಸುವ ಪ್ರತಿಯೊಂದು ಸಂಯುಕ್ತ ಮಾದರಿಯ ಆ ಜಮೀನನ್ನು ಪ್ರತಿನಿಧಿಸುವಂತಾಗಲು ಈ ಕೆಳಗಿನ ಎಚ್ಚರಿಕೆಗಳನ್ನು ಅವಶ್ಯಕವಾಗಿ ವಹಿಸಬೇಕು.
1. ರಾಸಾಯನಿಕ ಅಥವಾ ಸಾವಯವ ಗೊಬ್ಬರಗಳನ್ನು ಹಾಕಿದ ಜಮೀನಿನಲ್ಲಿ ಕೂಡಲೇ ಮಾದರಿ ತೆಗೆಯಬಾರದು.
2. ಮಡಿಗಳ ಏರು ಮೇರೆಗಳ ಹತ್ತಿರ ಮಾದರಿ ತೆಗೆಯಬಾರದು.
3. ರಸ್ತೆಯ ಹತ್ತಿರ ಮಾದರಿ ತೆಗೆಯಬಾರದು.
4.ಮರದ ನೆರಳಿನಲ್ಲಿ ಮಾದರಿ ತೆಗೆಯಬಾರದು.
5. ಕೊಟ್ಟಿಗೆ ಅಥವಾ ಕಾಂಪೋಸ್ಟ್ ಗೊಬ್ಬರ ರಾಶಿ ಹಾಕಿದ ಸ್ಥಳಗಳಲ್ಲಿ ಮಾದರಿ ತೆಗೆಯಬಾರದು.
6. ಕಟ್ಟಡಗಳ ಹತ್ತಿರ ಮಾದರಿ ತೆಗೆಯಬಾರದು.
7. ಕಾಲುವೆಗಳು / ಹಳ್ಳಗಳ ಸಮೀಪದಲ್ಲಿ ಮಾದರಿ ತೆಗೆಯಬಾರದು.
8. ಅಥವಾ ಇನ್ಯಾವುದೇ ರೀತಿಯಲ್ಲಿ ಅದು ಜಮೀನನ್ನು ಪ್ರತಿನಿಧಿಸದಿದ್ದರೆ ಆ ಸ್ಥಳದಲ್ಲಿ ಮಾದರಿ ತೆಗೆಯಬಾರದು.
ಮಣ್ಣು ಮಾದರಿಯನ್ನು ಯಾವಾಗ ಸಂಗ್ರಹಿಸಬೇಕು?
ಸಾಮಾನ್ಯವಾಗಿ ವಾರ್ಷಿಕ ಬೆಳೆಗಳನ್ನು ಬಿತ್ತುವುದಕ್ಕಿಂತ ಮುಂಚೆ ಮಣ್ಣು ಮಾದರಿ ತೆಗೆದು ವಿಶ್ಲೇಷಿಸಿದರೆ. ಮುಂದಿನ ಬೆಳೆಗೆ ದಸಗೊಬ್ಬರಗಳನ್ನು ಶಿಫಾರಸು ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ ಮುಂಗಾರಿನಲ್ಲಿ ಮುಂಗಾರು ಮಳೆಗಿಂತ ಮುಂಚೆ ಅಡ್ಡ ಮಳೆ ಬಂದಾಗ. ಮಣ್ಣು ಸಾಕಷ್ಟು ತೇವಗೊಂಡಾಗ ಮಾದರಿ ತೆಗೆಯಬಹುದು. ಅಥವಾ ಹಿಂಗಾರಿ / ಬೇಸಿಗೆ ಬೆಳೆ ಕೊಯ್ದಾದ ನಂತರ ಕೂಡಲೇ (ಜಮೀನು ಒಣಗಿ ಗಟ್ಟಿಯಾಗುವುದಕ್ಕಿಂತ ಮುಂಚೆ) ಮಾದರಿ ಸಂಗ್ರಹಿಸಬೇಕು. ತೋಟಗಾರಿಕೆ ಬೆಳೆಗಳಲ್ಲಿ ವಾರ್ಷಿಕವಾಗಿ (ಮುಂಗಾರಿಗಿಂತ ಮುಂಚೆ) ಗಿಡಗಳ ಎರಡು ಸಾಲುಗಳ ಮಧ್ಯದಲ್ಲಿ ಮಾದರಿ ತೆಗೆಯಬೇಕು.
ಮಣ್ಣು ಮಾದರಿಯ ಪರಿಷ್ಕರಣೆ: “ಕ್ವಾರ್ಟರಿಂಗ್” ವಿಧಾನದ ಮೂಲಕ
500ಗ್ರಾಂ. ಗಾತ್ರಕ್ಕೆ ಇಳಿಸಿದ ಮಣ್ಣಿನ ಮಾದರಿಯನ್ನು ಒಂದು ಚೊಕ್ಕಟವಾದ ಪ್ಲಾಸ್ಟಿಕ್. ಅಥವಾ ಪೇಪರ್ ಹಾಳೆಯಮೇಲೆ ಹರಡಿ ನೆರಳಿನಲ್ಲಿ ಎರಡು/ಮೂರು ದಿವಸ ಒಣಗಿಸಬೇಕು. ನಂತರ ಅದನ್ನು ಮರದ ಒರಳಿನಲ್ಲಿ ಹಾಕಿ ಮರದ ಒನಕೆಯಿಂದ ಕುಟ್ಟಿ ಪುಡಿ ಮಾಡಬೇಕು. ಪುಡಿ ಮಾಡಿದ ಮಣ್ಣನ್ನು 2 ಮಿಲಿ ಮೀಟರ್ ಅಗಲದ ದಂಧ್ರಗಳಿರುವ ಜರಡಿಯಲ್ಲಿ ಹಾಕಿ ಸೋಸಬೇಕು. ಜರಡಿಯ ಮೇಲೆ ಉಳಿಯುವ ಮಣ್ಣಿನಲ್ಲಿರುವ ಕಲ್ಲು / ಗರಸುಗಳನ್ನು ಹೊರಚೆಲ್ಲಿ ಪುನಃ ಅದನ್ನು ಕುಟ್ಟಿ ಜರಡಿ ಹಿಡಿಯಬೇಕು.
ಈ ರೀತಿಯಾಗಿ ಎರಡು ಮೂರು ಬಾರಿ ಪುನರಾವರ್ತಿಸಿ ಎಲ್ಲಾ ಮಣ್ಣು ಜರಡಿಯಲ್ಲಿ ಹಾಯುವಂತೆ ಮಾಡಬೇಕು. ಸಾವಯವ ಇಂಗಾಲದ ವಿಶ್ಲೇಷಣೆಗಾಗಿ ಮಣ್ಣನ್ನು 0.2 ಮಿಲಿ ಮೀಟರ್ಗಳಿಗಿಂತಲೂ ಸೂಕ್ಷ್ಮವಾಗಿ ಪುಡಿಮಾಡುವುದು ಅವಶ್ಯಕವಿರುತ್ತದೆ. ಈ ರೀತಿಯಾಗಿ ಪರಿಷ್ಕರಿಸಿದ ಮಣ್ಣಿನ ಮಾದರಿಯನ್ನು ದರಿಯನ್ನು ಪ್ಲಾಸ್ಟಿಕ್ ಡಬ್ಬಿ / ಚೀಲ, ಗಾಜಿನ ಡಬ್ಬಿ. ಅಥವಾ ಬಟ್ಟೆಯ ಚೀಲದಲ್ಲಿ ಸಂಗ್ರಹಿಸಿಡಬೇಕು. ಮಣ್ಣಿನ ಪೂರ್ಣ ವಿವರಗಳನ್ನೊಳಗೊಂಡ ಗುರುತು ಚೀಟಿಯನ್ನು ಮಾದರಿಗೆ ಲಗತ್ತಿಸಬೇಕು.