Home » ರಾಜೀವ್ ಗಾಂಧಿ ಯೋಜನೆ ಅಡಿಯಲ್ಲಿ ಹೊಸ ಮನೆಗೆ ಅರ್ಜಿ ಆಹ್ವಾನ

ರಾಜೀವ್ ಗಾಂಧಿ ಯೋಜನೆ ಅಡಿಯಲ್ಲಿ ಹೊಸ ಮನೆಗೆ ಅರ್ಜಿ ಆಹ್ವಾನ

ರೈತರೇ ಕೇಂದ್ರ ಸರ್ಕಾರವು ರೈತರಿಗೆ ಮತ್ತೋಂದು ಹೊಸ ಅವಕಾಶಗಳು ನೀಡುತ್ತೀದ್ದಾರೆ. ಅದೇ ರೀತಿ ಈಗ ಸರ್ಕಾರವು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ. (ಗ್ರಾಮೀಣ) ಅಡಿಯಲ್ಲಿ ಅರ್ಹ ವಸತಿ ರಹಿತರ ಹಾಗೂ ನಿವೇಶನರಹಿತರ ಸಮೀಕ್ಷೆ ನಡೆಸಲು ದಿನಾಂಕ 31.03.2025 ವರೆಗೆ ಕಾಲಾವಕಾಶ ನೀಡಿದ್ದು, ಪ್ರಸ್ತುತ ಉಲ್ಲೇಖ ಪತ್ರದಲ್ಲಿ ಸಮೀಕ್ಷೆ ಕಾರ್ಯವನ್ನು ದಿನಾಂಕ 30.04.2025 ರವರೆಗೆ ವಿಸ್ತರಿಸಿರುವುದಾಗಿ ತಿಳಿಸಿರುತ್ತದೆ.

ಈಗಾಗಲೇ ನಿಗಮವು ದಿನಾಂಕ 25.03.2025ರ ಪತ್ರದಲ್ಲಿ ಸಮೀಕ್ಷೆ ಕಾರ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮ ಪಂಚಯಾತ್ / ಗ್ರಾಮ. ಮಟ್ಟದಲ್ಲಿ ಜಾಗೃತಿ ಅಭಿಯಾನ (IEC Activity) ಕೈಗೊಂಡು, ಶೇಕಡಾ 100 ರಷ್ಟು ಅರ್ಹ ವಸತಿರಹಿತರ ಕುಟುಂಬಗಳ ಸಮೀಕ್ಷೆ ನಡೆಸಲು ಈಗಾಗಲೇ ತಿಳಿಸಲಾಗಿದೆ.

ಸದರಿ ಸಮೀಕ್ಷೆಯಲ್ಲಿ ಅರ್ಹ ವಸತಿರಹಿತರು ಕೈಬಿಟ್ಟು ಹೋಗಬಾರದೆಂಬ ಕಾರಣದಿಂದ ಸಮೀಕ್ಷೆ ನಡೆಸಲು ದಿನಾಂಕ 30.4.2025 ರವರೆಗೆ ಗಡುವು ವಿಸ್ತರಿಸಿರು ವುದರಿಂದ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ. ಜಾಗೃತಿ ಅಭಿಯಾನ (IEC Activity) ಕೈಗೊಂಡು ಯಶಸ್ವಿಯಾಗಿ ಸಮೀಕ್ಷೆ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಕ್ತ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಕೋರಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ – (PMAY-U 2.0) ಯೋಜನೆಯು ‘ಎಲ್ಲರಿಗೂ ವಸತಿ’ ಎಂಬ ದೃಷ್ಟಿಕೋನದೊಂದಿಗೆ ದೇಶಾದ್ಯಂತ ಎಲ್ಲಾ ಅರ್ಹ ನಗರ ಕುಟುಂಬಗಳಿಗೆ ಎಲ್ಲಾ ಹವಾಮಾನದಲ್ಲೂ ಪಕ್ಕಾ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಗರ ಪ್ರದೇಶಗಳಲ್ಲಿನ ಅರ್ಹ ಕುಟುಂಬಗಳಿಗೆ ಈ ಕೆಳಗಿನ ನಾಲ್ಕು ಕ್ಷೇತ್ರಗಳಲ್ಲಿ ಹಣಕಾಸಿನ ನೆರವು ನೀಡುವ ಯೋಜನೆಯನ್ನು ಜಾರಿಗೊಳಿಸುತ್ತದೆ:

ಫಲಾನುಭವಿಗಳ ನೇತೃತ್ವದ ನಿರ್ಮಾಣ (BLC): ಯೋಜನೆಯ BPL ಕುಟುಂಬ ₹3 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವ EWS ವರ್ಗಗಳಿಗೆ ಸೇರಿದ ವೈಯಕ್ತಿಕ ಅರ್ಹ ಕುಟುಂಬಗಳಿಗೆ ₹2.5 ಲಕ್ಷದವರೆಗೆ ಹಣಕಾಸಿನ ನೆರವು ನೀಡುತ್ತದೆ. 45 ಚದರ ಮೀಟರ್ (ಸರ್ವ ಹವಾಮಾನದಲ್ಲೂ ವಾಸಿಸುವ ಘಟಕ) ವರೆಗೆ ತಮ್ಮದೇ ಆದ ಲಭ್ಯವಿರುವ ಭೂಮಿಯಲ್ಲಿ ಹೊಸ ಪಕ್ಕಾ ಮನೆಗಳನ್ನು ನಿರ್ಮಿಸಲು ಸರ್ಕಾರವು ಮುಂದಾಗಿದೆ.

ಕರ್ನಾಟಕ ಸರ್ಕಾರವು ಜನವರಿ 2000 ರಂದು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಪ್ರಾರಂಭಿಸಿತು. ರಾಜ್ಯದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ಇರುವ ವರ್ಗದ ಫಲಾನುಭವಿಗಳಿಗೆ ವಸತಿ ಯೋಜನೆಗಳನ್ನು ಒದಗಿಸುತ್ತಾ ಬಂದಿದೆ. ಇದರಿಂದ ರಾಜ್ಯದ ಪ್ರತಿಯೊಬ್ಬ ನಾಗರಿಕರು ಸರ್ಕಾರದ ಈ ಯೋಜನೆಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆ ಜಾರಿಯಿಂದ ರಾಜ್ಯದಾದ್ಯಂತ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕೈಗೆಟಕುವ ದರದಲ್ಲಿ ಮನೆಗಳನ ಒದಗಿಸಲಾಗುವುದು. ಈ ಯೋಜನೆಯು ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಉತ್ತೇಜಿಸುತ್ತದೆ. ಈ ಯೋಜನೆಯ ಮೂಲಕ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೆಚ್ಚ-ಪರಿಣಾಮಕಾರಿ ಕಟ್ಟಡ ತಂತ್ರಜ್ಞಾನಗಳನ್ನು ಉತ್ತೇಜಿಸಲಾಗುತ್ತದೆ. ಈ ಯೋಜನೆಯು ಕರ್ನಾಟಕದ ನಾಗರಿಕರ ಜೀವನಮಟ್ಟವನ್ನು ಸುಧಾರಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉
https://ashraya.karnataka.gov.in/nannamane/index.aspx

ಮನೆ ಪಡೆಯಲು ಅಪ್ಲಿಕೇಶನ್ ಹಾಕುವ ವಿಧಾನ –

1. https://ashraya.karnataka.gov.in,
2. ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಿ.
3. ವಲಯ, ವಾರ್ಡ್ ಸಂಖ್ಯೆ ಹಾಗೂ ಪ್ರಸ್ತುತ ವಿಳಾಸದ ಜೊತೆಗೆ ಪಿನ್ ಸಂಖ್ಯೆಯನ್ನು ನಮೂದಿಸಿ ಮುಂದುವರಿಸಿ.
4. ಆಧಾ‌ರ್ ಸಂಖ್ಯೆ, ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ಮುಂದುವರೆಸುವುದು.
5. ಪಡಿತರ ಚೀಟಿಯ ಸಂಖ್ಯೆಯನ್ನು ನಮೂದಿಸಿದ ನಂತರ ಪಡಿತರ ಚೀಟಿಯಲ್ಲಿರುವಂತಹ ವ್ಯಕ್ತಿಗಳ ವಿವರಗಳು ಪ್ರದರ್ಶನಗೊಳ್ಳುತ್ತವೆ, ಆ ಸಂದರ್ಭದಲ್ಲಿ ಯಾವ ವ್ಯಕ್ತಿಯ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿದು ಅಂತಹ ಹೆಸರಿನ ಮುಂದೆ ಇರುವ ಚೆಕ್ ಬಾಕ್ಸ್ ಅನ್ನು ಆಯ್ಕೆಮಾಡಿ.
6. ಅರ್ಜಿದಾರನ ಸ್ವ ವಿವರಗಳನ್ನು ನಮೂದಿಸಿ ಮುಂದುವರೆಸುವುದು.
7. ಜಾತಿ ಮತ್ತು ಆದಾಯ ಪತ್ರದ ಆರ್ ಡಿ ಸಂಖ್ಯೆಯನ್ನು ನಮೂದಿಸಿ ಮುಂದುವರೆಯುವುದು (ಸೂಚನೆ: ಆದಾಯ ಪ್ರಮಾಣದ ಮಿತಿ ಮೂರು ಲಕ್ಷಕ್ಕಿಂತ ಕಡಿಮೆ ಇರತಕ್ಕದ್ದು).
8. ಅರ್ಜಿದಾರನು ಯಾವುದೇ ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸಲು ಇಚ್ಚಿಸಿದ್ದಲ್ಲಿ ಪೂರಕ ಮಾಹಿತಿಯನ್ನು ನಮೂದಿಸುವುದು.
9. ಅರ್ಜಿದಾರನು ಬೆಂಗಳೂರು ಜಿಲ್ಲೆಯಲ್ಲಿ ವಾಸಿಸಿರುವ ಅವಧಿಯನ್ನು ಆಯ್ಕೆಮಾಡಿ, ವಾಸಸ್ಥಳದ ಆರ್ ಡಿ ಸಂಖ್ಯೆಯನ್ನು ನಮೂದಿಸಿ ಮುಂದುವರೆಯುವುದು.
10. ಅರ್ಜಿದಾರನ ಬ್ಯಾಂಕ್ ಗೆ ಸಂಬಂಧಿಸಿದ ವಿವರವನ್ನು ನಮೂದಿಸಿ ಮುಂದುವರೆಯುವುದು.
11. ಅರ್ಜಿದಾರನ ಉದ್ಯೋಗ ಸ್ಥಿತಿಯನ್ನು ಆಯ್ಕೆಮಾಡಿ ಸೇವ್ ಬಟನ್ ಅನ್ನು ಕ್ಲಿಕ್ ಮಾಡಿ.
12. ಸೇವ್ ಬಟನ್ ಅನ್ನು ಕ್ಲಿಕ್ ಮಾಡುವ ಮೊದಲು ದಯವಿಟ್ಟು ಮೇಲೆ ತಿಳಿಸಿದ ವಿವರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿ.
13. ಅರ್ಜಿದಾರರು ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುತ್ತದೆ.
14. ಅರ್ಜಿದಾರರ ಅರ್ಜಿಯ ಸ್ಥಿತಿಯ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಸಂದೇಶವನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ರವಾನಿಸಲಾಗುವುದು.
15. ಒ ಟಿ ಪಿ ಅನ್ನು ನಮೂದಿಸಿದ ನಂತರ ಪುಟವು ಚಲನ್ ಅಥವಾ ಆನ್ ಲೈನ್ ಪಾವತಿಗೆ ನಿರ್ದೇಶಿಸುತ್ತದೆ.

Leave a Reply

Your email address will not be published. Required fields are marked *