ಸಾವಯವ ಕೃಷಿ ಮಾಡುವವರು ರೋಗ – ಕೀಟ ನಿಯಂತ್ರಣ ಹೇಗೆ ಮಾಡಬೇಕು?
ಸಾವಯವ ಕೃಷಿ : ನಿಸರ್ಗದಲ್ಲಿರುವ ಎಲ್ಲ ಜೀವಿ-ಸಸ್ಯ ಪ್ರಭೇದಗಳಿಗೂ ಬದುಕುವ ಹಕ್ಕಿದೆ ಮತ್ತು ಆ ಶಕ್ತಿಕೂಡ ಇದೆ. ಹಾಗಾಗಿ ನಾವು ಯಾವುದೇ ಕೀಟ ಅಥವಾ ರೋಗಗಳನ್ನು ನಿರ್ಮೂಲನೆ ಮಾಡುವುದು ಅಸಾಧ್ಯ ಮತ್ತು ಅನಗತ್ಯ. ಬದಲಿಗೆ ಅವು ನಮ್ಮ ಬೆಳೆಗಳಿಗೆ ವಾಣಿಜ್ಯಕ ನಷ್ಟ ಉಂಟುಮಾಡದಂತೆ ನೋಡಿಕೊಂಡರೆ ಸಾಕು. ಈ ಉದ್ದೇಶಕ್ಕೆ ಸಮಗ್ರ ರೋಗ-ಕೀಟ ನಿಯಂತ್ರಣ ಕ್ರಮ ಅನುಸರಿಸಬೇಕು. ನಿಸರ್ಗದಲ್ಲಿ ಉಪಕಾರಿ ಕೀಟಗಳೂ ಸಾಕಷ್ಟಿವೆ. ಪ್ರತಿ ಜೀವಿಗೂ ಹಲವಾರು ಸ್ವಾಭಾವಿಕ ಶತ್ರುಗಳಿವೆ. ಹಾಗಾಗಿ ಒಟ್ಟಾರೆ ನಿಸರ್ಗ ಸಮತೋಲನದಲ್ಲಿರುತ್ತದೆ. ಆದರೆ ಪರಿಸರದಮೇಲೆ…
