
ಮುಂಗಾರು 2025 ರ ಭೂಮಿ ತಯಾರಿಕೆ ಹೇಗಿರಬೇಕು? ಕೃಷಿ ವಿಜ್ಞಾನಿಗಳ ಸಲಹೆ
ಮುಂಗಾರು 2025 ರ ಭೂಮಿ ತಯಾರಿಕೆ ಹೇಗಿರಬೇಕು? ಅವಲೋಕನ ಮಾಡಿದಾಗ ಕೃಷಿಯ ನಿಜವಾದ ವಾಸ್ತವ ಸತ್ಯವೆಂದರೆ ಇಳುವರಿ ವೃದ್ಧಿಸುವುದು ಯಾವ ರೈತರಿಗೆ ಬೇಡ? ಇದು ಎಲ್ಲ ರೈತರಿಗೂ ಅವಶ್ಯ. ಆದರೆ ರೈತರಿಗೆ ಕೃಷಿ ಉತ್ಪಾದನೆಗೆ ಕೈಗೆಟುಕದ ಬೆಲೆ, ಬೇಕಾದಾಗ ಬಾರದ ಮಳೆ, ವಾತಾವರಣದಲ್ಲಿನ ಬದಲಾವಣೆಯ ಸಮಸ್ಯೆ ಒಂದೆ-ಎರಡೆ? ಆದರೂ, ಕೃಷಿಯೊಂದು ಜೀವನ ಕಾಯಕ, ಸುಮ್ಮನೆ ಕೂರಲಾಗುವುದಿಲ್ಲ, ಆದರೂ ಏನಾದರೂ ಎಂತಾದರೂ ಮಾಡಿ ಸಾಧಿಸಬೇಕೆನ್ನುವವರಿಗೇನೂ ಕಮ್ಮಿಯಿಲ್ಲ. ಇದರಿಂದಲೇ ಇಂದು ದೇಶದಲ್ಲಿ ದಾಖಲೆ ಮಟ್ಟದಲ್ಲಿ (350 ಕ್ಕೂ ಹೆಚ್ಚು ಮಿಲಿಯನ್…