ಪ್ರೀಯ ರೈತರೇ ಇವತ್ತು ಸಾವಯವ ದ್ರಾವಣದ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇನೆ. ಏನಿದು ಪಂಚಗವ್ಯ? ಏನು ಇದರ ಕೆಲಸ? ಯಾವ ಬೆಳೆಗಳಿಗೆ ಸೂಕ್ತ? ಯಾವಾಗ ಬಳಸಬೇಕು? ಇದೆಲ್ಲದರ ಸಂಪೂರ್ಣ ಮಾಹಿತಿ ನೀಡುತ್ತೇನೆ.
ಪಂಚಗವ್ಯ ತಯಾರಿಸುವ ವಿಧಾನ (20 ಲೀಟರ್ಗೆ):
ಅಗತ್ಯವಿರುವ ಪದಾರ್ಥಗಳು:
- ತಾಜಾ ನಾಟಿ ಹಸುವಿನ ಸಗಣಿ: 5 ಕೆ.ಜಿ
- ಹಸುವಿನ ತುಪ್ಪ: 1 ಕೆ.ಜಿ
- ಗೋಮೂತ್ರ: 3 ಲೀಟರ್
- ಹಸುವಿನ ಹಾಲು: 2 ಲೀಟರ್
- ಹಸುವಿನ ಮೊಸರು: 2 ಲೀಟರ್
- ಮಾಗಿದ ಬಾಳೆಹಣ್ಣು: 1 ಡಜನ್
- ತೆಂಗಿನ ನೀರು: 3 ಲೀಟರ್
- ಬೆಲ್ಲ: 1 ಕೆ.ಜಿ (ಅಥವಾ 0.5 ಕೆಜಿ)
ಪಂಚಗವ್ಯ ತಯಾರಿ ಹಂತಗಳು –
- ಮೊದಲ 3 ದಿನಗಳು: ಒಂದು ಪ್ಲಾಸ್ಟಿಕ್ ಡ್ರಮ್ನಲ್ಲಿ 5 ಕೆಜಿ ಸಗಣಿ ಮತ್ತು 1 ಕೆಜಿ ತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 3 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಲಕಬೇಕು.
- 4ನೇ ದಿನ: ಉಳಿದ ಪದಾರ್ಥಗಳಾದ ಗೋಮೂತ್ರ, ಹಾಲು, ಮೊಸರು, ಮಾಗಿದ ಬಾಳೆಹಣ್ಣು, ತೆಂಗಿನ ನೀರು ಮತ್ತು ಬೆಲ್ಲವನ್ನು ಆ ಮಿಶ್ರಣಕ್ಕೆ ಸೇರಿಸಿ.
- ಹುದುಗುವಿಕೆ: ಈ ಮಿಶ್ರಣವನ್ನು 15 ರಿಂದ 20 ದಿನಗಳವರೆಗೆ ನೆರಳಿನಲ್ಲಿ ಇರಿಸಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮರದ ಕೋಲಿನಿಂದ ಮಿಶ್ರಣವನ್ನು ಪ್ರದಕ್ಷಿಣಾಕಾರವಾಗಿ (Clockwise) ತಿರುಗಿಸಬೇಕು.
ಪಂಚಗವ್ಯ ಬಳಕೆ:
* 20-30 ದಿನಗಳ ನಂತರ, ಪಂಚಗವ್ಯವು ಸುವಾಸನೆಯಿಂದ ಕೂಡಿ ಬಳಸಲು ಸಿದ್ಧವಾಗುತ್ತದೆ.
* ಪ್ರತಿ ಪಂಪಿಂಗೆ 80-100 ಮೀಲಿ ಹಾಕಿ ಸ್ಪ್ರೇ ಮಾಡಬೇಕು.
* ಅಥವಾ ನೀರಿನಲ್ಲಿ ಸಹ ಬಿಡಬಹುದು.
ಬೆಳೆ ಸಿಂಪರಣಾ ಸಮಯ –
* ಭತ್ತ 10, 15, 30 ಮತ್ತು 50 ದಿನಗಳು ಬಿತ್ತನೆ ಮಾಡಿದ ನಂತರ.
* ಉದ್ದಿನಕಾಳು 15,25 ಮತ್ತು 40 ದಿನಗಳು ಬಿತ್ತನೆ ಮಾಡಿದ ನಂತರ.
* ಹೆಸರುಕಾಳು 15, 25, 45 ಮತ್ತು 50 ದಿನಗಳು ಬಿತ್ತನೆ ಮಾಡಿದ ನಂತರ.
* ಕಬ್ಬಿಗೆ ಪ್ರತಿ ತಿಂಗಳಿಗೊಮ್ಮೆ ಡ್ರಿಪ್ ಮೂಲಕ ಬಿಡುವುದು.
* ಪಂಚಗವ್ಯವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡುವುದರ ಜೊತೆಗೆ ಬೀಜೋಪಚಾರ ಮಾಡಲು ಸಹ ಬೆಳೆಸಬಹುದು.
