
ಆನ್ ಲೈನ್ ನಲ್ಲಿ ಒರಿಜಿನಲ್ ಪಹಣಿ ಪಡೆಯುವ ವಿಧಾನ
ಆತ್ಮೀಯ ವಂದನೆಗಳು ರೈತ ಬಾಂಧವರೇ, ರೈತರಿಗಾಗಿ ಉಪಯುಕ್ತ ಯೋಜನೆಗಳನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ಸುಲಭ ಭಾಷೆಯಲ್ಲಿ ನೀಡುವ ಕೃಷಿ ವಾಣಿ ಜಾಲತಾಣಕ್ಕೆ ಸುಸ್ವಾಗತ. ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಸತತವಾಗಿ ಜಾರಿಗೆ ತರುತ್ತಿದೆ. ಕೃಷಿ ಈಗಿನ ದಿನಮಾನಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಮೂಂಚೂಣಿವಹಿಸಿದೆ. ರೈತರು ತಮ್ಮ ಕೃಷಿ ಜೀವನದಲ್ಲಿ ತಿಳಿದುಕೊಳ್ಳಲೇಬೇಕಾದ ಮುಖ್ಯ ವಿಷಯಗಳಲ್ಲಿ ಜಮೀನಿನ ಪೊಡಿ ಅಥವಾ ಪಹಣಿಯ ಬಗೆಗಿನ ಮಾಹಿತಿಯು ಸಹ ಒಂದಾಗಿದೆ. ಇಂದು ನಾವು ಒರಿಜಿನಲ್ ಪಹಣಿ ಅಂದರೆ RTC…